Friday, June 15, 2012

ನರನುಮಂತಲೆಯವೋಲ್ ಪರಿಪರಿದು ಬಸವಳಿದು (226)

ನರನುಮಂತಲೆಯವೋಲ್ ಪರಿಪರಿದು ಬಸವಳಿದು |
ಬೆರೆತು ಜನಜೀವನದಿ ತನ್ನತನವಳಿಯೆ ||
ಚರ ಜಗನ್ಮೂಲದ ಸ್ಥಿರತತ್ತ್ವವನು ಬಯಸಿ |
ಕರಗುವುದೆ ಮುಕ್ತಿಪದ - ಮರುಳ ಮುನಿಯ || (೨೨೬)

(ನರನುಮಂತು+ಎಲೆಯವೋಲ್)(ತನ್ನತನವ+ಅಳಿಯೆ)(ಜಗತ್+ಮೂಲದ)

ಮನುಷ್ಯನೂ ಸಹ ನೀರಿನ ಅಲೆಗಳಂತೆ ಹರಿದು, ಸುಸ್ತಾಗಿ ಜನಜೀವನದಲ್ಲಿ ಒಂದಾಗಿ ಸೇರಿಕೊಂಡು ತಾನೇ ಬೇರೆ ಎನ್ನುವ ಅಭಿಪ್ರಾಯವನ್ನು ಕಳೆದುಕೊಂಡು, ಚಲಿಸುತ್ತಿರುವ ಜಗತ್ತಿನ ಆದಿ ಮತ್ತು ಹುಟ್ಟಿನ ಸ್ಥಿರ ಸಿದ್ಧಾಂತವನ್ನು ಅಪೇಕ್ಷಿಸಿ ಅದರಲ್ಲಿ ಕರಗಿಹೋಗುವುದೇ ಮೋಕ್ಷಕ್ಕೆ ದಾರಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A water wave flows on and on and finally gets exhausted
Likewise a man’s losing his separate identity living with fellow beings
And melting himself yearning for the Eternal Truth,
The every root of the all this changing world is liberation – Marula Muniya
(Translation from "Thus Sang Marula Muniya" by Sri. Narasimha Bhat)


No comments:

Post a Comment