Tuesday, June 26, 2012

ಉಡುರಾಜನುಬ್ಬಿಳಿತ ಬಿಟ್ಟು ದೃಢನಾದಂದು (232)

ಉಡುರಾಜನುಬ್ಬಿಳಿತ ಬಿಟ್ಟು ದೃಢನಾದಂದು |
ಕಡಲಲೆಗಳುರುಳಿಡದೆ ನಿದ್ದೆವೋದಂದು ||
ಗುಡುಗು ಸಿಡಿಲುಗಳುಳಿದು ಬಾನ್ ಮಳೆಯ ಕರೆದಂದು |
ಪೊಡವಿಗಪ್ಪುದು ಶಾಂತಿ - ಮರುಳ ಮುನಿಯ || (೨೩೨)

(ಉಡುರಾಜನ+ಉಬ್ಬು+ಇಳಿತ)(ದೃಢನ್+ಆದಂದು)(ಕಡಲ್+ಅಲೆಗಳ್+ಉರುಳಿಡದೆ)(ಸಿಡಿಲುಗಳ್+ಉಳಿದು)(ಪೊಡವಿಗೆ+ಅಪ್ಪುದು)

ಚಂದ್ರ(ಉಡುರಾಜ)ನು ವರ್ಧಿಸುವುದು ಮತ್ತು ಕ್ಷೀಣಿಸುವುದನ್ನು ಬಿಟ್ಟು ಬಲಶಾಲಿಯಾದ ದಿನ, ಸಮುದ್ರದ ಅಲೆಗಳು ಉರುಳದೆ ನಿಶ್ಚಲವಾದ ದಿನ, ಗುಡುಗು ಮತ್ತು ಸಿಡಿಲುಗಳು ಇರದೆ ಆಕಾಶವು ಮಳೆ ಹೊಯ್ದ ದಿನ, ಜಗತ್ತಿಗೆ (ಶಾಂತಿ) ದೊರೆಯುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the moon remains the same without waxing and waning,
When the sea waves sleep without rolling and roaring
When the sky pours with no lightning and thunder
Then peace descends on the world – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment