Thursday, June 28, 2012

ಅಂತರ್ಧನಂ ಬಾಹ್ಯಧನಕಿಂತ ಮಿಗಿಲೆಂದು (234)

ಅಂತರ್ಧನಂ ಬಾಹ್ಯಧನಕಿಂತ ಮಿಗಿಲೆಂದು |
ಸ್ವಾಂತಶಿಕ್ಷಣೆ ರಾಜ್ಯವಿಧಿಗೆ ಮೇಲೆಂದು ||
ಅಂತಶ್ಯಮಂ ಪ್ರಕೃತಿ ವಿಷಮಗಳ ಹಾಯ್ದಂದು |
ಶಾಂತಿ ನರಮಂಡಲಕೆ - ಮರುಳ ಮುನಿಯ || (೨೩೪)

(ಅಂತರ್+ಧನಂ)(ಮಿಗಿಲ್+ಎಂದು)(ಮೇಲ್+ಎಂದು)(ಅಂತಃ+ಶ್ಯಮಂ)(ಹಾಯ್ದ+ಅಂದು)

ತನ್ನ ಮನಸ್ಸಿಗೆ ಸಿಗುವ ಸಮಾಧಾನ ಮತ್ತು ತೃಪ್ತಿಗಳು, ಹೊರಜಗತ್ತಿನಲ್ಲಿ ದೊರಕುವ ಸಂಪತ್ತುಗಳಿಗಿಂತ ಅಧಿಕವಾದದ್ದೆಂದು ತಿಳಿದ ದಿನ, ತನ್ನ ಮನಸ್ಸನ್ನು ತಾನೇ ದಂಡಿಸಿ ತಿದ್ದುಕೊಳ್ಳುವುದು, ದೇಶದ ನಿಯಮ ಮತ್ತು ಕಟ್ಟಳೆಗಳಿಗಿಂತ ಒಳ್ಳೆಯದೆಂದು ಅರಿವಾದ ದಿನ, ತನ್ನ ಆತ್ಮಸಂಯಮವು, ಪ್ರಕೃತಿಯ ಭಯಂಕರವಾದ ವಿಕೋಪಗಳನ್ನು ದಾಟಿ ಹೋದ ದಿನ, ಮನುಷ್ಯ ಕೋಟಿಗೆ ಶಾಂತಿ ದೊರೆಯುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When we realize that the inner wealth is more valuable than outer wealth
And that self discipline is better than the state control,
And when peace within overcomes all odds outside,
Mankind would be blessed with abiding peace – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment