Thursday, June 7, 2012

ತನುವೆಚ್ಚರಿರಲು ಮನನಿದ್ರಿಸೆ ಸಮಾಧಿಯದು (221)

ತನುವೆಚ್ಚರಿರಲು ಮನನಿದ್ರಿಸೆ ಸಮಾಧಿಯದು |
ಮನವೆಚ್ಚರಿರಲು ತನು ನಿದ್ರಿಸಿರೆ ಯೋಗ ||
ತನುಮನಸುಗಳು ಲೋಕಭಾರವೆನದಿರೆ ಶಾಂತಿ |
ಅನಿತರಜ್ಞತೆ ಮುಕ್ತಿ - ಮರುಳ ಮುನಿಯ || (೨೨೧)

(ತನು+ಎಚ್ಚರ+ಇರಲು)(ಸಮಾಧಿ+ಅದು)(ಮನ+ಎಚ್ಚರ+ಇರಲು)(ಲೋಕಭಾರ+ಎನದೆ+ಇರೆ)(ಅನಿತರ+ಅಜ್ಞತೆ)

ದೇಹ ಎಚ್ಚರವಾಗಿರುವಾಗ ಮನಸ್ಸು ನಿದ್ದೆ ಮಾಡುತ್ತಿದ್ದರೆ ಅದು ಸಮಾಧಿ ಸ್ಥಿತಿ ಎಂದೆನ್ನಿಸಿಕೊಳ್ಳುತ್ತದೆ. ಆದರೆ ಮನಸ್ಸು ಜಾಗ್ರತದಿಂದಿರುವಾಗ ದೇಹವು ನಿದ್ರಿಸಿದ್ದರೆ ಅದು ಯೋಗಸ್ಥಿತಿಯಾಗುತ್ತದೆ. ದೇಹ ಮತ್ತು ಮನಸ್ಸುಗಳು ಈ ಪ್ರಪಂಚವು ಭಾರ ಎನ್ನದೆ ಜೀವನವನ್ನು ನಡೆಸಿದರೆ ಶಾಂತಿ ದೊರೆಯುತ್ತದೆ. ಇನ್ನೊಂದಿದೆ ಎಂದು ತಿಳಿಯದಿರುವ (ಅನಿತರ ಜ್ಞಾನ) ಸ್ಥಿತಿಯೇ ಮೋಕ್ಷ.

(Translation from "Thus Sang Marula Muniya" by Sri. Narasimha Bhat)
If body is awake when mind is asleep it is Samadhi
If the mind remains awake when body is asleep it is Yoga
Peace would reign when body and mind do not feel the weight of the world
Non-awareness of separateness itself is salvation – Marula Muniya

No comments:

Post a Comment