Showing posts with label ಭೃತ್ಯನೆಂತರಿಗುಂ ಸ್ವಕರ್ತವ್ಯಮಂ ಸ್ವಾಮಿ. Show all posts
Showing posts with label ಭೃತ್ಯನೆಂತರಿಗುಂ ಸ್ವಕರ್ತವ್ಯಮಂ ಸ್ವಾಮಿ. Show all posts

Tuesday, March 5, 2013

ಭೃತ್ಯನೆಂತರಿಗುಂ ಸ್ವಕರ್ತವ್ಯಮಂ ಸ್ವಾಮಿ (374)

ಭೃತ್ಯನೆಂತರಿಗುಂ ಸ್ವಕರ್ತವ್ಯಮಂ ಸ್ವಾಮಿ |
ಚಿತ್ತವನು ತಾಂ ಕಾಣದಂದೆನ್ನಬೇಡ ||
ಪ್ರತ್ಯಹದಿ ನಿನಗೆ ಬಹ ಲೋಕ ಸಂಪರ್ಕದಿನೆ |
ಕೃತ್ಯಸೂಚನೆ ನಿನಗೆ - ಮರುಳ ಮುನಿಯ || (೩೭೯)

(ಭೃತ್ಯನು+ಎಂತರಿಗುಂ)(ಕಾಣದು+ಅಂದು+ಎನ್ನಬೇಡ)

ಸೇವಕನಾದವನು ತಾನು ಮಾಡಬೇಕಾದ ಕೆಲಸವನ್ನು ಎಷ್ಟು ಮಾತ್ರ ಅರ್ಥ ಮಾಡಿಕೊಂಡರೂ ಸಹ ಅವನು ತನ್ನ ಒಡೆಯನ ಮನಸ್ಸನ್ನು ತಿಳಿದುಕೊಳ್ಳಲಾರ ಎಂದು ಹೇಳಬೇಡ. ನಿನಗೆ ಲೋಕದ ಜೊತೆ ಬರುವ ಪ್ರತಿದಿನ(ಪ್ರತ್ಯಹ)ದ ಸಂಬಂಧಗಳಿಂದ, ನೀನು ಮಾಡಬೇಕಾಗಿರುವ ಕೆಲಸದ (ಕೃತ್ಯ) ಸೂಚನೆಗಳು ಸಿಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Do you think that a servant cannot know his duties
And he cannot read his master’s mind
You are taught your duties through public contact
That you obtain in your daily life – Marula Muniya
(Translation from "Thus Sang Marula Muniya" by Sri. Narasimha Bhat)