Monday, June 6, 2011

ಸಾಗರಂ ಬ್ರಹ್ಮವದರಿಂದೆ ತಾತ್ಕಾಲದುಪ- (20)

ಸಾಗರಂ ಬ್ರಹ್ಮವದರಿಂದೆ ತಾತ್ಕಾಲದುಪ- |
ಯೋಗಕಾಗಿಹ ಕಾಲ್ವೆಯೆಲ್ಲ ದೇವರ‍್ಕಳ್ ||
ವಾಗೀಶ ಲಕ್ಷ್ಮೀಶ ಗೌರೀಶಮುಖರೆಲ್ಲ |
ರಾಗ ಭೋಗಕ್ಕಲ್ತೆ - ಮರುಳ ಮುನಿಯ || (೨೦)

(ಬ್ರಹ್ಮ+ಅದರಿಂದೆ)(ತಾತ್ಕಾಲದ+ಉಪಯೋಗಕೆ+ಆಗಿಹ)(ಭೋಗಕ್ಕೆ+ಅಲ್ತೆ)

ಸಾಗರ ಬ್ರಹ್ಮ. ಆ ಜಲಾಶಯದಿಂದ ಹೊರಡುವ ಆ ಸಮಯಕ್ಕೆ ಮಾತ್ರ ಉಪಯೋಗವಾಗುವ ಕಾಲುವೆಗಳೆಲ್ಲವೂ ದೇವರುಗಳಿದ್ದಂತೆ. ಬ್ರಹ್ಮ(ವಾಗೀಶ), ವಿಷ್ಣು(ಲಕ್ಷ್ಮೀಶ) ಮತ್ತು ಶಿವ(ಗೌರೀಶ)ರ ಮುಖಗಳೆಲ್ಲವೂ ಪ್ರೀತಿ(ರಾಗ) ಮತ್ತು ಸುಖಾನುಭವ(ಭೋಗ)ಗಳಿಗೋಸ್ಕರ ತಾನೆ?

No comments:

Post a Comment