Thursday, October 13, 2011

ಮರಗಟ್ಟಿ ಕಾಂಡ ಬುಡದಲಿ ಮೇಲೆ ಕೊಂಬೆಯಲಿ (85)


ಮರಗಟ್ಟಿ ಕಾಂಡ ಬುಡದಲಿ ಮೇಲೆ ಕೊಂಬೆಯಲಿ |
ಮರಲ ತಳೆವುದು ಚಿಗುರಿ ಕಾಷ್ಠತೆಯ ದಾಟಿ ||
ನರನಂತು ದೇಹಿತೆಯ ಮೃಚ್ಛಿಲಾಂಶವ ಮೀರೆ |
ಪರಮಾರ್ಥಸುಮದೆ ಕೃತಿ - ಮರುಳ ಮುನಿಯ || (೮೫)

(ನರನ್+ಅಂತು)(ಮೃತ್+ಶಿಲಾ+ಅಂಶ)

ಮರವು ಕಾಂಡ ಮತ್ತು ಬುಡದಲ್ಲಿ ಗಟ್ಟಿಯಾಗಿರುತ್ತದೆ. ಕೊಂಬೆಗಳ ಮೇಲೆ ಅದು ಮರದ ಕಟ್ಟಿಗೆ(ಕಾಷ್ಠ)ತನವನ್ನು ಮೀರಿ, ಚಿಗುರಿ, ಹೂವನ್ನು (ಮರಲ) ಬಿಡುತ್ತದೆ. ಅದೇ ರೀತಿ ಮನುಷ್ಯನೂ ಸಹ ಅವನ ದೇಹದ ಮಣ್ಣು (ಮೃತ್) ಮತ್ತು ಕಲ್ಲು(ಶಿಲಾ)ಗಳ ಭಾಗಗಳನ್ನು ದಾಟಿಹೋದರೆ ಮೋಕ್ಷವೆಂಬ ಹೂವನ್ನು(ಸುಮ) ದೊರಕಿಸಿಕೊಂಡು ಧನ್ಯ(ಕೃತಿ)ನಾಗುತ್ತಾನೆ.

No comments:

Post a Comment