Wednesday, January 25, 2012

ನರತೆಯೇಂ ದೈವಾಂಶ ಜೀವಾಂಶ ಮಿಶ್ರಣಂ (148)

ನರತೆಯೇಂ ದೈವಾಂಶ ಜೀವಾಂಶ ಮಿಶ್ರಣಂ |
ಇರುವೆಲ್ಲದರ ಸಮಷ್ಟಿ ಜ್ವಾಲೆ ದೈವಂ ||
ಉರಿಯಿಂದ ಹೊರಬಿದ್ದು ಕರಿಯಪ್ಪ ಕಿಡಿ ಜೀವ |
ಮರಳಿ ಕರಿಯುರಿಯಕ್ಕೆ - ಮರುಳ ಮುನಿಯ || (೧೪೮)

(ದೈವ+ಅಂಶ)(ಜೀವ+ಆಂಶ)(ಇರುವ+ಎಲ್ಲದರ)(ಕರಿ+ಅಪ್ಪ)(ಕರಿ+ಉರಿ+ಅಕ್ಕೆ)

ಮನುಷ್ಯತೆ ಎನ್ನುವುದು ಏನು? ಅದು ಜೀವ ಮತ್ತು ದೈವ ಭಾಗಗಳನ್ನು ಸೇರಿಸಿ ಮಾಡಿರುವ ವಸ್ತು. ಜಗತ್ತಿನ ಎಲ್ಲದರ ಸಮಗ್ರವಾಗಿರುವ ಬೆಂಕಿಯ ಉರಿಯೇ(ಜ್ವಾಲೆ) ದೈವ. ಈ ಬೆಂಕಿಯ ಉರಿಯಿಂದ ಹೊರಗಡೆ ಬಿದ್ದ ಜೀವ ಇದ್ದಲು (ಕರಿ) ಆಗಿಹೋಗುತ್ತದೆ. ಅದೇ ಜೀವವು ಪುನಃ ಇದ್ದಲಿನಿಂದ ಬೆಂಕಿಯಜ್ವಾಲಯಾಗುತ್ತದೆ.

No comments:

Post a Comment