Monday, March 26, 2012

ತಡೆಯಿರದೊಡತ್ತಿತ್ತ ಪರಿದಾಡುವುದು ನೀರು (181)

ತಡೆಯಿರದೊಡತ್ತಿತ್ತ ಪರಿದಾಡುವುದು ನೀರು |
ಎಡೆಯ ಗೊತ್ತೊಂದಿರದ ನರಮನವುಮಂತು ||
ಗುಡಿಯೆಂಬುದಿನ್ನೇನು ? ನಿನ್ನಾತ್ಮಕದು ಕೇಂದ್ರ |
ನೆಡು ಮನವನದರೊಳಗೆ - ಮರುಳ ಮುನಿಯ || (೧೮೧)

(ತಡೆಯಿರದೊಡೆ+ಅತ್ತಿತ್ತ)(ಪರಿದು+ಆಡುವುದು)(ಗೊತ್ತು+ಒಂದು+ಇರದ)(ನರಮನವುಂ+ಅಂತು)(ಗುಡಿ+ಎಂಬುದು+ಇನ್ನೇನು)(ನಿನ್ನ+ಆತ್ಮಕೆ+ಅದು)(ಮನವನ್+ಅದರ+ಒಳಗೆ)

ಯಾವ ವಿಧವಾದ ಅಡೆತಡೆಗಳಿಲ್ಲದಿದ್ದಲ್ಲಿ, ನೀರು ಎಲ್ಲೆಡೆಯೂ ಹರಿಯುತ್ತದೆ. ಒಂದು ನೆಲೆ ಮತ್ತು ಲಕ್ಷ್ಯ ಇಲ್ಲದಿರುವ ಮನುಷ್ಯನ ಮನಸ್ಸೂ ಸಹ ಹಾಗೆಯೇ ಹರಿದಾಡುತ್ತದೆ. ದೇವಸ್ಥಾನ ಎನ್ನುವುದು ನಿನ್ನ ಆತ್ಮಕ್ಕೆ ಒಂದು ಕೇಂದ್ರ ಸ್ಥಳ. ನಿನ್ನ ಮನಸ್ಸನ್ನು ಅದರೊಳಗೆ ಇಡು.

No comments:

Post a Comment