Wednesday, March 12, 2014

ಸೃಷ್ಟಿವ್ಯವಸ್ಥೆಯೊಳ್ ವ್ಯರ್ಥಮಾವುದುಮಿರದು (586)

ಸೃಷ್ಟಿವ್ಯವಸ್ಥೆಯೊಳ್ ವ್ಯರ್ಥಮಾವುದುಮಿರದು |
ಬೆಟ್ಟ ನದಿ ಮರುಭೂಮಿ (ಮಣ್) ಕಾಡು ಕಣಿವೆ ||
ವೃಷ್ಟಿಕಾರಕಗಳವು ವಾಯುಶೋಧಕಗಳವು |
ದಿಟ್ಟಿಸಾಳದಿ ನಿಜವ - ಮರುಳ ಮುನಿಯ || (೫೮೬)

(ವ್ಯರ್ಥಂ+ಆವುದುಂ+ಇರದು)(ವೃಷ್ಟಿಕಾರಕಗಳ್+ಅವು)(ಶೋಧಕಗಳ್+ಅವು)(ದಿಟ್ಟಿಸು+ಆಳದಿ)

ಸೃಷ್ಟಿಯ ವ್ಯವಸ್ಥೆಯಲ್ಲಿ ವ್ಯರ್ಥವಾಗಿರುವುದು ಯಾವುದೂ ಇರುವುದಿಲ್ಲ. ಬೆಟ್ಟ, ನದಿ ಮರುಭೂಮಿ, ಮಣ್ಣು, ಅರಣ್ಯ, ಕಣಿವೆ, ಇವುಗಳೆಲ್ಲವೂ ಮಳೆಯನ್ನು ಸುರಿಸಲು ಕಾರಣಗಳಾಗುತ್ತವೆ. ಮತ್ತು ಗಾಳಿಯನ್ನು ಶುದ್ಧಪಡಿಸುತ್ತವೆ. ಈ ಸತ್ಯಸಂಗತಿಯನ್ನು ಗಂಭೀರವಾಗಿ ಪರಿಗಣಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nothing is wasted in the working on creation
Hills, rivers, deserts, jungles and valleys
The cause rainfall and purify the air
Realize this underlying truth – Marula Muniya (586)
(Translation from "Thus Sang Marula Muniya" by Sri. Narasimha Bhat)

No comments:

Post a Comment