Wednesday, March 19, 2014

ಮಾರನಿಳೆಯೊಳ್ ಸುರಾವಾಟಿಕೆಯನಿರಿಸದಿರೆ (591)

ಮಾರನಿಳೆಯೊಳ್ ಸುರಾವಾಟಿಕೆಯನಿರಿಸದಿರೆ |
ಗಾರುಡಿಯನಾಡದಿರೆ ರುದ್ರಶಕ್ತಿಗಳು ||
ವೈರಿಂಚಿಕರ್ಮದಲಿ ಚಾತುರ್ಯವಿನ್ನೇನು |
ಹೋರಿಪ್ಪುದವನ ಕಲೆ - ಮರುಳ ಮುನಿಯ || (೫೯೧)

(ಮಾರನ್+ಇಳೆಯೊಳ್)(ಸುರಾವಾಟಿಕೆಯನ್+ಇರಿಸದಿರೆ)(ಗಾರುಡಿಯನ್+ಆಡದೆ+ಇರೆ)(ಚಾತುರ್ಯ+ಇನ್ನೇನು)(ಹೋರಿಪ್ಪುದು+ಅವನ)

ಮನ್ಮಥನು (ಮಾರ) ಭೂಮಿ(ಇಳೆ)ಯಲ್ಲಿ ಮತ್ತು ತರುವಂತಹ ಪದಾರ್ಥಗಳನ್ನು ಇರಿಸದಿದ್ದಲ್ಲಿ, ಶಿವನ ಭೀಕರ ಶಕ್ತಿಗಳು ತಮ್ಮ ಇಂದ್ರಜಾಲ (ಗಾರುಡಿ) ಶಕ್ತಿಗಳನ್ನು ತೋರಿಸದಿದ್ದಲ್ಲಿ, ಬ್ರಹ್ಮಸೃಷ್ಟಿಯ ಕಾರ್ಯದಲ್ಲಿ ಇನ್ಯಾವ ಚತುರತೆ ಇದ್ದೀತು? ಹೋರಾಟವಾಡಿಸುವುದೇ ಅವನ ಕಲೆಯಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If Cupid doesn’t set up liquor shops in the world,
If the terrible forces don’t indulge in their jugglery
What dexterity is there in the Creator’s world?
Making us fight is also His art – Marula Muniya (591)
(Translation from "Thus Sang Marula Muniya" by Sri. Narasimha Bhat)

No comments:

Post a Comment