Monday, January 5, 2015

ಸರ್ವಜ್ಞನಾಳುತಿರಲೇಕಿಂತು ಲೋಕದಲಿ (714)

ಸರ್ವಜ್ಞನಾಳುತಿರಲೇಕಿಂತು ಲೋಕದಲಿ |
ದುರ್ವಾರ ದೋಷಗಳು? ಧರ್ಮಲೋಪಗಳು ? ||
ಸರ್ವಕಾರುಣಿಕಪ್ರಭುತ್ವದೊಳಗೇಕಿಂತು |
ನಿರ್ವಿಣ್ಣತೆಯೊ ಜನಕೆ ? - ಮರುಳ ಮುನಿಯ || (೭೧೪)

(ಸರ್ವಜ್ಞನು+ಆಳುತ+ಇರಲ್+ಏಕೆ+ಇಂತು)(ಪ್ರಭುತ್ವದ+ಒಳಗೆ+ಏಕೆ+ಇಂತು)

ಸಕಲವನ್ನೂ ಅರಿತಿರುವ ಪರಮಾತ್ಮನು ಆಳುತ್ತಿರುವ ಈ ಜಗತ್ತಿನಲ್ಲಿ ಏಕೆ ಈ ತಡೆಯಲಿಕ್ಕಾಗದಂತಹ (ದುರ್ವಾರ) ಕುಂದುಕೊರತೆಗಳು ಮತ್ತು ಧರ್ಮಲೋಪಗಳು? ಎಲ್ಲರಲ್ಲೂ ದಯೆ ಮತ್ತು ಕನಿಕರಗಳನ್ನು ತೋರಿಸತಕ್ಕಂತಹ ಆಡಳಿತದಲ್ಲಿ ಜನಗಳಿಗೆ ನಿರಾಸೆ ಮತ್ತು ದುಃಖಗಳು ಏಕೆ ಮತ್ತು ಹೇಗೆ ಬಂತು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Why such irresistible evils and ethical lapses
In this world ruled by the omniscient Lord?
Why such despair to people under the rule of
The All merciful King? – Marula Muniya (714)
(Translation from "Thus Sang Marula Muniya" by Sri. Narasimha Bhat)

No comments:

Post a Comment