Thursday, March 28, 2013

ಬ್ರಹ್ಮ ವಿಭು ಜಗಕೆಂದು ಜನ ನೆನೆದು ನಡೆವಂದು (395)

ಬ್ರಹ್ಮ ವಿಭು ಜಗಕೆಂದು ಜನ ನೆನೆದು ನಡೆವಂದು |
ಕರ್ಮಫಲವೆಂದು ಲಬ್ಧವ ಭುಜಿಸುವಂದು ||
ಧರ್ಮವಲ್ಲದ ಭಾಗ್ಯ ವಿಷವೆಂದು ತೊರೆವಂದು |
ನೆಮ್ಮದಿಯೊ ಲೋಕದಲಿ - ಮರುಳ ಮುನಿಯ || (೩೯೫)

(ಜಗಕೆ+ಎಂದು)(ಕರ್ಮಫಲ+ಎಂದು)(ಭುಜಿಸುವ+ಅಂದು)(ಧರ್ಮ+ಅಲ್ಲದ)(ವಿಷ+ಎಂದು)(ತೊರೆವ+ಅಂದು)

ಜಗತ್ತಿನಲ್ಲಿ ವಾಸಿಸುತ್ತಿರುವ ಜನಗಳು, ಈ ಪ್ರಪಂಚಕ್ಕೆ ಒಡೆಯ (ವಿಭು) ಬ್ರಹ್ಮನೆಂದು ಜ್ಞಾಪಿಸಿಕೊಂಡು ಅದೇ ರೀತಿ ನಡೆದುಕೊಂಡ ದಿನ, ತಮಗೆ ದೊರಕಿದ್ದುದನ್ನು (ಲಬ್ಧ) ತಮ್ಮ ಕರ್ಮದ ಫಲವೆಂದು ತಿಳಿದು ಅದನ್ನು ಸಂತೋಷದಿಂದ ಸೇವಿಸಿದ ದಿನ, ಧರ್ಮವನ್ನು ಬಿಟ್ಟು ದೊರಕಿದ ಸಿರಿ, ಸಂಪತ್ತುಗಳು, ವಿಷಕ್ಕೆ ಸಮಾನವೆಂದು ಅವುಗಳನ್ನು ತೊರೆದ ದಿನ, ಈ ಪ್ರಪಂಚದಲ್ಲಿ ನೆಮ್ಮದಿ, ಸುಖ ಮತ್ತು ಸಂತೋಷಗಳು ನೆಲಸುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When people accept God as Overlord and live in peace
When they accept their lot as the fruit of their Karma and live their lives
When reject unrighteous wealth as deadly poison
Happiness will prevail in the world – Marula Muniya || (395)
(Translation from "Thus Sang Marula Muniya" by Sri. Narasimha Bhat)

No comments:

Post a Comment