Thursday, April 3, 2014

ದುರಿತಕ್ಷಯಕ್ಕೆಂದು ಮಾಡೆಲ್ಲ ಮಾಳ್ಕೆಗಳ (600)

ದುರಿತಕ್ಷಯಕ್ಕೆಂದು ಮಾಡೆಲ್ಲ ಮಾಳ್ಕೆಗಳ |
ಪೊರೆವನಿಳೆಯನು ನೀನೆ ? ಶಿವನದಧಿಕಾರ ||
ಧರುಮವನು ಬಿಡದೆ ನೀಂ ದುಡಿ ಗಳಿಸು ನಿರ್ವಹಿಸು |
ಮರೆಯದಾತ್ಮದ ಹಿತವ - ಮರುಳ ಮುನಿಯ || (೬೦೦)

(ದುರಿತ+ಕ್ಷಯಕ್ಕೆ+ಎಂದು)(ಪೊರೆವನ್+ಇಳೆಯನು)(ಶಿವನದು+ಅಧಿಕಾರ)(ಮರೆಯದೆ+ಆತ್ಮದ)

ನೀವು ಮಾಡುವ ಎಲ್ಲಾ ಕೆಲಸ(ಮಾಳ್ಕೆ) ಕಾರ್ಯಗಳನ್ನು ಪಾಪ(ದುರಿತ)ಗಳನ್ನು ನಶಿಸು(ಕ್ಷಯ)ವುದಕ್ಕೋಸ್ಕರ ಮಾತ್ರವೇ ಮಾಡು. ಭೂಮಿ(ಇಳೆ)ಯನ್ನು ಕಾಪಾಡು(ಪೊರೆ)ವವನು ನೀನೇನು? ಅದು ಶಿವನ ಆಡಳಿತದ ವ್ಯಾಪ್ತಿಯಲ್ಲಿ ಬರುತ್ತದೆ. ನೀನು ಮಾಡಬೇಕಾದ ಧರ್ಮವನ್ನು, ಆತ್ಮಕ್ಕೆ ಒಳ್ಳೆಯದಾಗಿರುವುದನ್ನು ಮರೆಯದೆ ಆಚರಿಸು, ಶ್ರಮಿಸು, ಸಂಪಾದಿಸು ಮತ್ತು ನಿಭಾಯಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Perform all virtuous acts to wash off your sins
Are you the protector of the world? It is the responsibility of Shiva
Work, earn and manage all your affairs without straying away from dharma
But forget not the wellbeing of your Soul – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment