Wednesday, April 30, 2014

ನೀತಿನಿಷ್ಠಂಗೆ ಜಯವಂತೆ, ರಾಮನೆ ಸಾಕ್ಷಿ (611)

ನೀತಿನಿಷ್ಠಂಗೆ ಜಯವಂತೆ, ರಾಮನೆ ಸಾಕ್ಷಿ |
ಸೀತೆಯಂ ಪಡೆದನಲ ಕಡೆಗೆ ಲಂಕೆಯಲಿ ||
ನೂತನ ಯುವೋತ್ಸಾಹವಂದು ಕುಂದಿತ್ತೇನೊ |
ಆತುರಂ ದೋಷವಲ - ಮರುಳ ಮುನಿಯ || (೬೧೧)

(ಯುವ+ಉತ್ಸಾಹ+ಅಂದು)(ದೋಷ+ಅಲ)

ನೀತಿಯನ್ನು ನಿಷ್ಠವಂತನಾಗಿ ಪಾಲಿಸುವವನಿಗೆ ಎಂದೆಂದಿಗೂ ಜಯವೆಂದು ಜಗತ್ತು ಹೇಳುತ್ತಾ ಬಂದಿದೆ. ಇದಕ್ಕೆ ಪುರಾವೆಯಾಗಿ ಶ್ರೀರಾಮನ ಚರಿತೆಯನ್ನು ಹೇಳಲಾಗುತ್ತದೆ. ಶ್ರೀರಾಮಚಂದ್ರನು ನೀತಿನಿಷ್ಠೆಯಿಂದ ಇದ್ದಿದ್ದರಿಂದ ಕಟ್ಟಕಡೆಗೆ ಶ್ರೀಲಂಕೆಯಲ್ಲಿ ಸೀತೆಯನ್ನು ಪಡೆಯಲು ಸಾಧ್ಯವಾಯಿತು ಅಲ್ಲವೆ? ಈಗಿನ ಕಾಲದಲ್ಲಿ ನಾವು ಕಾಣುತ್ತಿರುವ ಯುವಜನರ ಉತ್ಸಾಹ ಆವತ್ತು ಕಡಿಮೆಯಾಗಿತ್ತೋ ಏನೋ? ಆತುರದಲ್ಲಿ ಕೆಲಸ ಮಾಡುವುದು ದೋಷಕಾರಿ ಆಗುತ್ತದೆ, ಅಲ್ಲವೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“One who is just will become victorious” Shri Rama himself proved
He could at last get Sita back in Lanka
But, perhaps his youthful enthusiasm must have ebbed by that time
Is not over eagerness a fault at times? – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment