Wednesday, May 18, 2011

ಈಶ್ವರನೆನಿಪ್ಪವನ ಬೆಂಗಡೆಯೆ ತಾಂ ಬ್ರಹ್ಮ (11)


ಈಶ್ವರನೆನಿಪ್ಪವನ ಬೆಂಗಡೆಯೆ ತಾಂ ಬ್ರಹ್ಮ |
ಶಾಶ್ವತಂ ಬ್ರಹ್ಮ ತಾತ್ಕಾಲಿಕಂ ದೇವರ್ ||
ವಿಶ್ವಮಂ ನಿರ್ಮಿಸಿಯೆ ನಿರ್ವಹಿಪನೀಶ್ವರಂ |
ನಿಷ್ಕ್ರಿಯಂ ಪರಬೊಮ್ಮ -ಮರುಳ ಮುನಿಯ || (೧೧)


(ಈಶ್ವರನ್+ಎನಿಪ್ಪವನ) (ನಿರ್ವಹಿಪನ್+ಈಶ್ವರಂ)

ಈಶ್ವರನೆನಿಸಿಕೊಳ್ಳುವನ ಹಿನ್ನೆಲೆಯಾಗಿರುವವನು (ಬೆಂಗಡೆಯೆ) ಬ್ರಹ್ಮ. ಈ ಪದ್ಯದಲ್ಲಿ ಈಶ್ವರ, ಬ್ರಹ್ಮರನ್ನು ಬೇರೆ ಬೇರೆ ಅರ್ಥದಲ್ಲಿ ಬಳಸಿದ್ದಾರೆ. ಮೊದಲು ಬ್ರಹ್ಮನಾಗಿದ್ದವನೇ ಈವಾಗ ಈಶ್ವರನೆನಿಸಿಕೊಂಡಿದ್ದಾನೆ. ಬ್ರಹ್ಮನಾದರೋ ಶಾಶ್ವತವಾಗಿರುವವನು, ದೇವರು ಮಾತ್ರ ತಾತ್ಕಾಲಿಕ. ಏಕೆಂದರೆ ಈ ಪ್ರಪಂಚವನ್ನು ನಿರ್ಮಾಣ ಮಾಡಿ ಅದನ್ನು ನಿಭಾಯಿಸುವವನು (ನಿರ್ವಹಿಪನ್) ಈಶ್ವರನು. ಬ್ರಹ್ಮನಾದರೋ ಬೇರೆ ಯಾವ ಕೆಲಸವನ್ನೂ ಮಾಡಲಾರ.

No comments:

Post a Comment