Monday, April 9, 2012

ತುಪ್ಪದಿಂ ಬೆಂಕಿಯಾರಿಪನು ವಾಮಾಚಾರಿ (189)

ತುಪ್ಪದಿಂ ಬೆಂಕಿಯಾರಿಪನು ವಾಮಾಚಾರಿ |
ಕಪ್ಪು ಮೈಸುಡೆ ಬಿಳ್ಪೆನುವನು ಹಟಯೋಗಿ ||
ಉಪ್ಪುನೀರನು ಸಪ್ಪೆಗೈದು ಭಟ್ಟಿಯುಪಾಯ-
ಕೊಪ್ಪದಾತುರ ದುಡುಕು - ಮರುಳ ಮುನಿಯ || (೧೮೯)

(ಬೆಂಕಿ+ಆರಿಪನು)(ಬಿಳ್ಪು+ಎನುವನು)(ಭಟ್ಟಿ+ಉಪಾಯಕೆ+ಒಪ್ಪದು+ಆತುರ)

ಮಾಟವನ್ನು ಆಚರಿಸುವವನು ತುಪ್ಪದಿಂದ ಬೆಂಕಿಯನ್ನು ಉಪಶಮನ ಮಾಡುತ್ತಾನೆ. ಮೈ ಸುಟ್ಟು ಕಪ್ಪಗಾದರೂ ಸಹ ಅದು ಬಿಳಿಯೆಂದೆನ್ನುತ್ತಾನೆ ಒಬ್ಬ ಹಟಯೋಗಿ. ಆದರೆ ಉಪ್ಪುನೀರನ್ನು ಕಾಯಿಸಿ ಭಟ್ಟಿಯಿಳಿಸಿ, ಆ ಉಪ್ಪನ್ನು ತೆಗೆದು ಯುಕ್ತಿಯಿಂದ ಮಾಡುವ ಕೆಲಸಕ್ಕೆ ಆತುರ ಮತ್ತು ದುಡುಕುತನ ಸಲ್ಲದು.

No comments:

Post a Comment