Thursday, July 12, 2012

ಅರ್ಚನೆ ಜಪ ಧ್ಯಾನ ಯಾತ್ರೆ ಮನದ ಸ್ಥಿತಿಗೆ (242)

ಅರ್ಚನೆ ಜಪ ಧ್ಯಾನ ಯಾತ್ರೆ ಮನದ ಸ್ಥಿತಿಗೆ |
ಚರ್ಚೆ ತರ್ಕ ವಿಚಾರ ಮತಿಯ ವಿಶದತೆಗೆ ||
ಪೆರ‍್ಚಿದ ತಪೋಯೋಗಯಜ್ಞಾದಿಯಾತುಮದ |
ವರ್ಚಸ್ಸಿಗಪ್ಪುದೆಲೊ - ಮರುಳ ಮುನಿಯ || (೨೪೨)

(ತಪೋಯೋಗ+ಯಜ್ಞ+ಆದಿ+ಆತುಮದ)(ವರ್ಚಸ್ಸಿಗೆ+ಅಪ್ಪುದು+ಎಲೊ)

ಪೂಜೆ, ಜಪ, ಧ್ಯಾನ ಮತ್ತು ತೀರ್ಥಯಾತ್ರೆಗಳು ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದಕ್ಕೂ, ವಾದ ವಿವಾದಗಳು, ತರ್ಕ ಮತ್ತು ಅಲೋಚನೆಗಳು ಬುದ್ಧಿಯ ಖಚಿತತೆಗೂ ಮತ್ತು ಇವೆಲ್ಲಕ್ಕಿಂತಲೂ ಮಿಗಿಲಾದ ತಪಸ್ಸು, ಯೋಗ ಮತ್ತು ಯಜ್ಞ ಇತ್ಯಾದಿಗಳು ಆತ್ಮದ ತೇಜಸ್ಸಿಗೂ ಯೋಗ್ಯವಾಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Worship, prayer, meditation and pilgrimage are for mind’s welfare
Discussions and arguments for clear understanding
Penance and selfless service are taken up
To make the Atman radiant – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment