Wednesday, July 25, 2012

ಉದ್ಯಾನದುಜ್ಜುಗೆಯ ದುಡಿತಕ್ಕೆ ಫಲವೇನು ? (250)

ಉದ್ಯಾನದುಜ್ಜುಗೆಯ ದುಡಿತಕ್ಕೆ ಫಲವೇನು ? |
ನಿತ್ಯ ಕಿಸಲಯ ಕುಸುಮ ನವಸೃಷ್ಟಿ ವೀಕ್ಷೆ ||
ಉದ್ಯತನ್ ಬ್ರಹ್ಮನಂತನವರತ ಸೃಷ್ಟಿಯಲಿ |
ಸದ್ಯಸ್ಕತಾ ತೋಷಿ - ಮರುಳ ಮುನಿಯ || (೨೫೦)

(ಉದ್ಯಾನದ+ಉಜ್ಜುಗೆಯ)(ಬ್ರಹ್ಮನಂತೆ+ಅನವರತ)

ಒಂದು ಉಪವನದಲ್ಲಿ ಕೆಲಸ ಮಾಡುವವನ ದುಡಿಮೆಗೆ ಫಲವೇನು ? ಪ್ರತಿದಿನವೂ ಹೊಸ ಹೊಸದಾಗಿ ಹುಟ್ಟುವ ಹೂವುಗಳು ಅರಳುವುದು (ಕಿಸ), ಬಾಡುವುದು (ಲಯ) ಮತ್ತು ಹೊಸ ಸೃಷ್ಟಿಯನ್ನು ಉತ್ಪಾದಿಸುವುದನ್ನು ನೋಡುವುದೇ (ವೀಕ್ಷೆ) ಅವನ ಕೆಲಸಕ್ಕೆ ಪ್ರತಿಫಲ. ಕರ್ತವ್ಯನಿಷ್ಠ ವ್ಯಕ್ತಿಯೂ ಸಹ ಪರಬ್ರಹ್ಮನಂತೆ ನಿರಂತರವಾದ ಈ ಸೃಷ್ಟಿಯಲ್ಲಿ, ಆಯಾ ಸಮಯದಲ್ಲಿ ತನಗೆ ದೊರೆತಿರುವುದನ್ನು ಕಂಡು ಅನುಭವಿಸಿ ಸಂತೋಷಿಸುತ್ತಾನೆ (ಸದ್ಯಸ್ಕತಾತೋಷಿ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What’s the reward for the gardener’s assiduous labour?
Witnessing new tender leaves and flowers every day.
Brahma likewise is ever busy with creation
He enjoys every moment of happiness – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment