Tuesday, November 12, 2013

ಪುರುಷಸಾಧ್ಯ ವಿವೇಕ ಸಿದ್ಧಿ ನಿರ್ಮಮತೆಯಿನೆ (525)

ಪುರುಷಸಾಧ್ಯ ವಿವೇಕ ಸಿದ್ಧಿ ನಿರ್ಮಮತೆಯಿನೆ |
ಪರಿಗೂಢ ಧರ್ಮಬೀಜದ ವಿಕಾಸದಿನೆ ||
ಚಿರ ಸಮಾಧಾನ ಕಲ್ಯಾಣ ಲೋಕಕ್ಕದನು |
ಪೊರೆವನೆ ಜನೋದ್ಧಾರಿ - ಮರುಳ ಮುನಿಯ ||

(ಲೋಕಕ್ಕೆ+ಅದನು)(ಜನ+ಉದ್ಧಾರಿ)

ಅಹಂಕಾರ, ಸ್ವಾರ್ಥ ಮತ್ತು ಮೋಹಗಳನ್ನು ತೊರೆಯುವುದರಿಂದ (ನಿರ್ಮಮತೆಯಿಂದ) ಮನುಷ್ಯನು ಯುಕ್ತಾಯುಕ್ತಾ ವಿವೇಚನೆಯ ಪರಿಜ್ಞಾನವನ್ನು ಹೊಂದಲು ಸಾಧ್ಯ. ಅತ್ಯಂತ ರಹಸ್ಯ(ಪರಿಗೂಢ)ವಾಗಿರುವ ಧರ್ಮದ ಬೀಜದ ಅರಳುವಿಕೆ(ವಿಕಾಸ)ಯಿಂದ ಶಾಶ್ವತವಾದ ನೆಮ್ಮದಿ ಮತ್ತು ಮಂಗಳಕರವಾದುದು ದೊರಕುತ್ತದೆ. ಇದನ್ನು ಕಾಪಾಡುವವನೇ ಜನಗಳನ್ನು ಉದ್ಧಾರ ಮಾಡುವವನೆನ್ನಿಸಿಕೊಳ್ಳುತ್ತೇನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Everlasting peace and welfare of the world can be achieved through
The maximum possible human discrimination and dispassion
And the growth and development of the mysterious dharma
He who promotes the above is the saviour of the world – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment