Tuesday, November 19, 2013

ಜನನೀತಿಯೇನತಂತ್ರದ ಮಾರ್ಗವೆನ್ನದಿರು (530)

ಜನನೀತಿಯೇನತಂತ್ರದ ಮಾರ್ಗವೆನ್ನದಿರು |
ಕನಸದನುಮಲೆಗೆಳೆಯೆ ನೆನಸು ಕುಳಿಗೆಳೆಗುಂ ||
ಅನುಸರಿಪುದಿಕ್ಕಟ್ಟಿನಲಿ ಮಧ್ಯಗತಿಯನದು |
ಕನಿಕರಿಸು ಲೋಕದಲಿ - ಮರುಳ ಮುನಿಯ || (೫೩೦)

(ಜನನೀತಿ+ಏನು+ಅತಂತ್ರದ)(ಮಾರ್ಗ+ಎನ್ನದೆ+ಇರು)(ಕನಸು+ಅದನು+ಮಲೆಗೆಳೆಯೆ)(ಕುಳಿಗೆ+ಎಳೆಗುಂ)(ಅನುಸರಿಪುದು+ಇಕ್ಕಟ್ಟಿನಲಿ)(ಮಧ್ಯಗತಿಯನ್+ಅದು)

ಲೋಕವನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಮಾಡಿರುವ ನ್ಯಾಯ ಮತ್ತು ಧರ್ಮಗಳ ನಿಯಮಗಳೆಲ್ಲವೂ, ಅನಿರ್ಭಂದಿತವಾದ, ಹೇಳುವವರೂ ಕೇಳುವವರೂ ಮತ್ತು ಮೇಲ್ವಿಚಾರಕರಿರದಿರುವ ದಾರಿಗಳೆಂದೆನ್ನಬೇಡ. ಕನಸು ಅವುಗಳನ್ನು ಬೆಟ್ಟದ ಶಿಖರಕ್ಕೆ ತೆಗೆದುಕೊಂಡು ಹೋದರೆ, ವಾಸ್ತವಿಕತೆಯು ಅವುಗಳನ್ನು ಗುಣಿಗೆ ಎಳೆದುಕೊಂಡು ಹೋಗುತ್ತದೆ. ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಅದು ಇವೆರಡೂ ಅಲ್ಲದ ಒಂದು ನಡುಮಾರ್ಗವನ್ನು ಅನುಸರಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ನೀನು ಲೋಕದಲ್ಲಿ ಕನಿಕರವನ್ನು ತೋರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“The conduct of people is through a thoughtless path”, say not so
Their dreams pull them to the hills and the realities push them to the ditch
With utmost difficulty people stick to the middle path
Have compassion on the world – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment