Friday, November 8, 2013

ದೇವನಿಂಗೆಂದು ದುಡಿ ಯಾವಾತನಿಗಮಲ್ತು (523)

ದೇವನಿಂಗೆಂದು ದುಡಿ ಯಾವಾತನಿಗಮಲ್ತು |
ಜೀವ ಶೋಧನೆಗೆ ದುಡಿ ಭೂವಿಭವಕಲ್ತು ||
ಈವನೆಲ್ಲರ್ಗಮೀಶಂ ತಕ್ಕುದವರವರ್ಗೆ |
ಆವರದಿ ತೃಪ್ತನಿರು - ಮರುಳ ಮುನಿಯ || (೫೨೩)

(ದೇವನಿಂಗೆ+ಎಂದು)(ಯಾವಾತನಿಗಂ+ಅಲ್ತು)(ಭೂವಿಭವಕೆ+ಅಲ್ತು)(ಈವನ್+ಎಲ್ಲರ್ಗಂ+ಈಶಂ)
(ತಕ್ಕುದು+ಅವರವರ್ಗೆ)(ತೃಪ್ತನ್+ಇರು)

ಪರಮಾತ್ಮನನ್ನು ಸಂತುಷ್ಟಪಡಿಸಲು ಕೆಲಸ ಮಾಡು, ಇನ್ನು ಬೇರೆ ಯಾರಿಗೋಸ್ಕರವಲ್ಲ. ಜೀವವನ್ನು ಸ್ವಚ್ಛಗೊಳಿಸಲು ಶ್ರಮಿಸು. ಭೂಮಿಯಲ್ಲಿ ನಿನಗೆ ದೊರಕುವ ವೈಭವ(ವಿಭವ)ಗಳಿಗಾಗಿ ಅಲ್ಲ. ಅವರವರಿಗೆ ಯೋಗ್ಯವಾಗಿ ದೊರಕಬೇಕಾದುದ್ದನ್ನು ಅವರವರಿಗೆ ಪರಮಾತ್ಮನು ನೀಡುತ್ತಾನೆ. ಈಶ್ವರನ ಆ ಅನುಗ್ರಹವನ್ನು ಸ್ವೀಕರಿಸಿ ತೃಪ್ತನಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Work for God and not for the sake of anyone else,
Work for the exploration of the soul and not for worldly wealth
God grants everybody what every one of them truly deserves
Be content with this boon – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment