Thursday, May 9, 2013

ಭೋಗ ರೋಗ ವಿಯೋಗ ದಾರಿದ್ರ್ಯ ಚಿಂತೆಗಳ (419)

ಭೋಗ ರೋಗ ವಿಯೋಗ ದಾರಿದ್ರ್ಯ ಚಿಂತೆಗಳ |
ಬೇಗೆಯಲಿ ಮಾನಸದ ಹಸಿರು ಮಾಗಾಯಿ ||
ಮಾಗಿ ಹಣ್ಣಾಗುವುದು ಹುಳಿಯೆ ಜೇನಾಗುವುದು |
ಭೂಗೋಲದಮೃತವದು - ಮರುಳ ಮುನಿಯ || (೪೧೯)

(ಹಣ್ಣು+ಆಗುವುದು)(ಜೇನು+ಆಗುವುದು)(ಭೂಗೋಲದ+ಅಮೃತ+ಅದು)

ಸುಖಾನುಭವಗಳ, ಕಾಯಿಲೆ ಕಸಾಲೆಗಳ, ಅಗಲಿಕೆಗಳ, ಬಡತನದ ಕಷ್ಟ ಮತ್ತು ತೊಂದರೆಗಳ ತಾಪ(ಬೇಗೆ)ಗಳಲ್ಲಿ ಮನಸ್ಸೆಂಬ ಹಸಿರಾಗಿರುವ ಮಾವಿನಕಾಯಿ (ಮಾಗಾಯಿ) ಪಕ್ವವಾಗಿ ಹಣ್ಣಾಗುತ್ತದೆ. ಆವಾಗ ಕಾಯಿಯಲ್ಲಿದ್ದ ಹುಳಿಯು ಹೋಗಿ ಅದು ಜೇನುತುಪ್ಪದಂತೆ ಸಿಹಿಯಾಗಿರುತ್ತದೆ. ಇದು ಪ್ರಪಂಚವು ನಮಗಿತ್ತಿರುವ ಅಮೃತ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The green mango of your mind gets mellowed
It ripens and its sourness turns into sweetness
In the heat of worries, sensual pleasures, bereavement and penury,
It is the ambrosia of the earth – Marula Muniya (419)
(Translation from "Thus Sang Marula Muniya" by Sri. Narasimha Bhat)

No comments:

Post a Comment