Thursday, May 23, 2013

ಜೀವ ಹೊರೆಯೇನಲ್ಲ, ಬಿಸುಡೆನುವುದೇಕದನು? (429)

ಜೀವ ಹೊರೆಯೇನಲ್ಲ, ಬಿಸುಡೆನುವುದೇಕದನು? |
ಸಾವು ನಷ್ಟವುಮಲ್ಲ, ಸಾಯೆ ಭಯವೇಕೆ? ||
ಜೀವಕಂ ಸಾವಿಗಂ ಸಮಸಿದ್ಧನಾದವನೆ |
ಕೋವಿದನು ತತ್ತ್ವದಲಿ - ಮರುಳ ಮುನಿಯ || (೪೨೯)

(ಹೊರೆ+ಏನ್+ಅಲ್ಲ)(ಬಿಸುಡು+ಎನುವುದು+ಏಕೆ+ಅದನು)(ನಷ್ಟವುಂ+ಅಲ್ಲ)(ಭಯ+ಏಕೆ)(ಸಮಸಿದ್ಧನ್+ಆದವನೆ)

ಜೀವವೆನ್ನುವುದು ಒಂದು ಭಾರವೇನೂ ಅಲ್ಲ. ಅದನ್ನು ಹೊರಲಾರದೆ, ಬಿಸಾಕು, ಎಂದೇಕೆ ಹೇಳುವೆ? ಸಾವೆನ್ನುವುದೂ ಸಹ ನಮ್ಮನ್ನು ನಾಶ ಮಾಡುವುದಿಲ್ಲ. ಆದುದ್ದರಿಂದ ಸಾವು ಎಂದರೆ ಏಕೆ ಹೆದರುವೆ? ಬದುಕಿ ಜೀವನವನ್ನು ನಡೆಸುವುದಕ್ಕೆ ಮತ್ತು ಮರಣಕ್ಕೂ ಸಮಾನವಾಗಿ ಸಿದ್ಧನಿರುವ ಮನುಷ್ಯನೇ ಸಿದ್ಧಾಂತವನ್ನು ತಿಳಿದುಕೊಂಡ ವ್ಯಕ್ತಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

This life is no burden and why should we discard it?
Death is no loss and why should we fear to die?
One who is equally prepared to live and die
Is the master philosopher – Marula Muniya (429)
(Translation from "Thus Sang Marula Muniya" by Sri. Narasimha Bhat)

No comments:

Post a Comment