Tuesday, May 14, 2013

ಕುದಿ-ಕುದಿದು ಬಿಸಿಯಾರಿ ಮನ ತಣ್ಣಗಾದಂದು (422)

ಕುದಿ-ಕುದಿದು ಬಿಸಿಯಾರಿ ಮನ ತಣ್ಣಗಾದಂದು |
ಬೆದಬೆದಕಿ ಕೈಸೋತು ಹುರುಡಡಗಿದಂದು ||
ಸೊದೆಗೆಂದು ಕಾದ ತುಟಿ ಸೊರಗಿ ತರಗಾದಂದು |
ಉದಯ ನವಯುಗ ನಿನಗೆ - ಮರುಳ ಮುನಿಯ ||(೪೨೨)

(ಬಿಸಿ+ಆರಿ)(ತಣ್ಣಗೆ+ಆದಂದು)(ಹುರುಡು+ಅಡಗಿದಂದು)(ಸೊದೆಗೆ+ಎಂದು)(ತರಗು+ಆದಂದು)

ವಿಪರೀತವಾಗಿ ಕುದ್ದು ಬಿಸಿಯಾದ ಮನಸ್ಸು ಆರಿ ತಣ್ಣಗಾದಾಗ, ಕೆದಕಿ, ಕೆದಕಿ, ಕೈಗಳು ಸೋತು, ಪೈಪೋಟಿ (ಹುರುಡು) ಮಾಡುವ ಶಕ್ತಿಯು ಕುಗ್ಗಿಹೋದಾಗ, ಅಮೃತ(ಸೊದೆ)ಕ್ಕೋಸ್ಕರ ಕಾದು ಕಾದು, ಅದು ದೊರಕದೆ ತುಟಿಯು ಬತ್ತಿ, ಒಣಗಿ(ತರಗು)ಹೋದಾಗ, ನಿನಗೆ ಹೊಸಯುಗವು ಹುಟ್ಟುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When your simmering mind steadily loses hear and cools down
When your spirit of competition dies down after long strenuous efforts
When your tongue becomes a withered leaf after craving for ambrosia
Then dawns a new age to you – Marula Muniya (422)
(Translation from "Thus Sang Marula Muniya" by Sri. Narasimha Bhat)

No comments:

Post a Comment