Wednesday, April 10, 2013

ಏನಿಂದು ಜನದ ಗತಿಯೇತಕಸ್ವಸ್ಥಮತಿ (404)

ಏನಿಂದು ಜನದ ಗತಿಯೇತಕಸ್ವಸ್ಥಮತಿ |
ಬೇನೆ ಪಿರಿತೆಂದುಮರಿಯದುದೇತಕಿಂದು? ||
ತಾಣಗೆಟ್ಟಲೆಯುತಿರ‍್ಪ ಪ್ರೇತದಂತೇಕೆ |
ಮಾನವನ ತಲ್ಲಣವೊ - ಮರುಳ ಮುನಿಯ || (೪೦೪)

(ಗತಿಯೇತಕೆ+ಅಸ್ವಸ್ಥಮತಿ)(ಪಿರಿತು+ಎಂದುಂ+ಅರಿಯದು+ಅದೇತಕಿಂದು)(ತಾಣಗೆಟ್ಟು+ಅಲೆಯುತ+ಇರ‍್ಪ)(ಪ್ರೇತದಂತೆ+ಏಕೆ)

ಪ್ರಪಂಚದಲ್ಲಿ ವಾಸಿಸುತ್ತಿರುವ ಜನಗಳ ಅವಸ್ಥೆಗಳು ಏಕೆ ಹೀಗಾಗಿವೆ? ಅವರು ಏತಕ್ಕಾಗಿ ವ್ಯಾಧಿಪೀಡಿತರಾಗಿದ್ದಾರೆ? ಈಗಾಗಲೇ ಕಾಯಿಲೆಯು ಉಲ್ಬಣಗೊಂಡಿದೆಯೆಂದು ಅವರು ಏತಕ್ಕಾಗಿ ತಿಳಿಯಲಾರರು? ಈ ಮನುಷ್ಯರ ತಳಮಳವು ತನ್ನ ಸ್ಥಾಳವನ್ನು ಬಿಟ್ಟು ಅಲೆಯುತ್ತಿರುವ ಪಿಶಾಚಿಯಂತೇಕಿದೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What’s the date of people today? Why are their minds so agitated?
Why don’t they realize that their sickness is serious?
Why is mankind so alarmed like a wandering ghost
That has lost its shelter? – Marula Muniya (404)
(Translation from "Thus Sang Marula Muniya" by Sri. Narasimha Bhat)

No comments:

Post a Comment