Monday, April 29, 2013

ಧರಣಿಯೌತಣದಿಂದ ನರನ ಮನಸಿಗೆ ವಿಕೃತಿ (412)

ಧರಣಿಯೌತಣದಿಂದ ನರನ ಮನಸಿಗೆ ವಿಕೃತಿ |
ನರನ ಕೃತ್ಯಂಗಳಿಂ ಧರಣಿಗಂ ವಿಕೃತಿ ||
ಪರಿಣಾಮವನ್ಯೋನ್ಯವಿಂತು ಸಂತತಮಿರಲು |
ಸ್ಥಿರತೆ ಲೋಕಕ್ಕೆಂತು - ಮರುಳ ಮುನಿಯ || (೪೧೨)

(ಧರಣಿಯ+ಔತಣದಿಂದ)(ಪರಿಣಾಮವು+ಅನ್ಯೋನ್ಯ+ಇಂತು)(ಸಂತತಂ+ಇರಲು)(ಲೋಕಕ್ಕೆ+ಎಂತು)

ಭೂಮಿಯು ಮನುಷ್ಯನನ್ನು ರಸಭರಿತವಾದ ಹಬ್ಬದೂಟಕ್ಕೆ ಅಹ್ವಾನಿಸುತ್ತಿರಲು, ಅವನ ಮನಸ್ಸು ಅನೇಕ ವಿಕಾರಗಳಿಗೆ ಒಳಗಾಗುತ್ತದೆ (ವಿಕೃತಿ). ಅಂತೆಯೇ ಮನುಷ್ಯನ ವಿಧ ವಿಧವಾದ ಕೆಲಸ ಮತ್ತು ಕಾರ್ಯಗಳಿಂದ, ಭೂಮಿಯೂ ಸಹ ವಿಕಾರಗಳಿಗೆ ಒಳಗಾಗುತ್ತದೆ. ಈ ರೀತಿ ಪರಸ್ಪರವಾಗಿ ಪರಿಣಾಮ ಯಾವಾಗಲೂ ಇರಲಾಗಿ, ಈ ಜಗತ್ತಿನಲ್ಲಿ ಸ್ಥಿರತೆಯು ಹೇಗೆ ತಾನೆ ಮೂಡೀತು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Man’s mind is distracted when he feasts on the bounties of the world
Human actions also cause changes in the world
When, these mutual effects last forever
How can the world remain the same forever? – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment