Wednesday, July 10, 2013

ಬಾಳೆಗೊನೆಯೊಂದರಿನಿವಣ್ಣ ನೂರರೊಳೆಲ್ಲೊ (461)

ಬಾಳೆಗೊನೆಯೊಂದರಿನಿವಣ್ಣ ನೂರರೊಳೆಲ್ಲೊ |
ಮೇಳಿಸಿಹನೊಂದರೊಳು ಸುಧೆಯನಜನೆಂಬರ್ ||
ಆಳೆನಿಬರಿರ‍್ದೊಡೇಂ ವ್ಯಕ್ತಿಬಲದಿಂ ನಾಡಿ - |
ನೇಳಿಗೆಯು ನಿಶ್ಚಿತವೊ - ಮರುಳ ಮುನಿಯ || (೪೬೧)

(ಬಾಳೆಗೊನೆ+ಒಂದರ+ಇನಿವಣ್ಣ)(ನೂರರೊಳ್+ಎಲ್ಲೊ)(ಮೇಳಿಸಿ+ಇಹನು+ಒಂದರೊಳು)(ಸುಧೆಯನ್+ಅಜನ್+ಎಂಬರ್)
(ಆಳ್+ಎನಿಬರ್+ಇರ‍್ದೊಡೆ+ಏಂ)(ನಾಡಿನ+ಏಳಿಗೆಯು)

ಸಿಹಿಯಾದ ಹಣ್ಣು(ಇನಿವಣ್ಣು)ಗಳಿಂದ ಕೂಡಿದ ನೂರಾರು ಬಾಳೆಗೊನೆಗಳಲ್ಲಿ ಯಾವುದೋ ಒಂದರಲ್ಲಿ ಮಾತ್ರ ಬ್ರಹ್ಮನು (ಅಜ) ಅಮೃತ(ಸುಧೆ)ವನ್ನು ಸೇರಿಸಿಟ್ಟಿರುವನೆನ್ನುತ್ತಾರೆ. ಎಷ್ಟು ಜನರಿದ್ದೇನು ಬಂತು? ಬಿಡಿ ವ್ಯಕ್ತಿಯ ಶಕ್ತಿಯಿಂದ ದೇಶದ ಪ್ರಗತಿ ಎನ್ನುವುದು ನಿರ್ಧಾರವಾಗಿರುವ ವಿಷಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

In a bunch of hundred plantains sweet
It is said that Brahma has hidden ambrosia in only one
Men may be many but the prosperity of a nation is assured
Only when merited individuals endeavour – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment