Monday, July 29, 2013

ಆರನುಂ ಬಿಡದ ಧರ್ಮಂ ಜಗದ್ರಥಸೇವೆ (474)

ಆರನುಂ ಬಿಡದ ಧರ್ಮಂ ಜಗದ್ರಥಸೇವೆ |
ಧೀರನೆಳೆವಂ ಬ್ರಹ್ಮಲೀಲೆಯೆಂದದನು ||
ತೇರು ನಿಜ ಭೋಗ್ಯ ಸಂಸಾರವೆಂಬ ಭ್ರಮೆಗೆ |
ಮಾರುವೋದಂ ಮೂಢ - ಮರುಳ ಮುನಿಯ || (೪೭೪)


(ಜಗತ್+ರಥಸೇವೆ)(ಧೀರನ್+ಎಳೆವಂ)(ಬ್ರಹ್ಮಲೀಲೆ+ಎಂದು+ಅದನು)(ಸಂಸಾರ+ಎಂಬ)

ಪ್ರಪಂಚವೆಂಬ ರಥದ ಸೇವೆಯನ್ನು ಮಾಡುವುದು ಯಾರನ್ನೂ ಬಿಡದಿರುವ ಕರ್ತವ್ಯ. ಶೂರನಾದವನು ಅದನ್ನು ಪರಬ್ರಹ್ಮನ ಕ್ರೀಡೆಯೆಂದು ಅರಿತು ಎಳೆಯುತ್ತಾನೆ. ತೇರು ತಾನು ಅನುಭವಿಸುವ ಸಂಸಾರ ಸುಖವೆಂಬ ತಪ್ಪುಗ್ರಹಿಕೆಗೆ ಮರುಳಾಗುವವನು(ಮಾರುವೋದಂ) ಒಬ್ಬ ಮೂರ್ಖನೇ ಸರಿ.
(
ಕೃಪೆ: ಶ್ರೀ. ಶ್ರೀಕಾಂತ್ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Pulling this world chariot is the bounden duty of every person.
The self-realized brave pulls it knowing it to be the play of God
But, one, who under illusion mistakes it to be his own family affair
For his own family enjoyment is a fool – Marula Muniya (474)
(Translation from "Thus Sang Marula Muniya" by Sri. Narasimha Bhat)

No comments:

Post a Comment